ಗುರುವಂದನಾ – 2017

ಶಿಕ್ಷಕರ ದಿನಾಚರಣೆ ಪ್ರಯುಕ್ತ ಪಡುಬಿದ್ರಿಯ ನಿವೃತ್ತ ಶಿಕ್ಷಕ, ಹಿರಿಯ ಧಾರ್ಮಿಕ ಮುಖಂಡರೂ ಆದ ಶ್ರೀ ನರಹರಿ ರಾವ್ ದಂಪತಿಗಳು (ಹರಿ ಮಾಸ್ಟು) ಪಾದೆಬೆಟ್ಟು, ಇವರಿಗೆ ತರಂಗಿಣಿ ಮಿತ್ರ ಮಂಡಳಿ (ರಿ), ಪಡುಬಿದ್ರಿ ವತಿಯಿಂದ ಸೆಪ್ಟೆಂಬರ್ 5 , 2017 ರಂದು ಗುರುವಂದನಾ ಕಾರ್ಯಕ್ರಮವು ಶ್ರೀಯುತರ ಸ್ವಗೃಹದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಪ್ರ. ಕಾರ್ಯದರ್ಶಿ ಮುರುಡಿ ಹರಿಕೃಷ್ಣ ರಾವ್, ಕೋಶಾಧಿಕಾರಿ ಶ್ರೀ ರಘುಪತಿ ರಾವ್, ಹಿರಿಯ ಸದಸ್ಯರುಗಳಾದ ಶ್ರೀ ಸುಧಾಕರ ರಾವ್, ಬಾಲಪ್ಪ ರಾಮಚಂದ್ರ ರಾವ್, ಸದಾಶಿವ ಆಚಾರ್, ಶ್ರೀಧರ ಆಚಾರ್, ಅಮರೇಂದ್ರ ಆಚಾರ್ಯ, ಪಾದೆಬೆಟ್ಟು ಬ್ರಾಹ್ಮಣ ವಲಯ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಉಡುಪ ಹಾಗೂ ಸಂಘದ ಇತರ ಸದಸ್ಯರುಗಳು ಉಪಸ್ಥಿತರಿದ್ದರು.
ಗುರುವಂದನಾ

ಗುರುವಂದನಾ

Leave a Reply