ಸ್ವಾತಂತ್ರ್ಯ ಅಮೃತ ಮಹೋತ್ಸವ – 2022

Monday, September 26th, 2022

ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಂದು ಮುಂಜಾನೆ ಗಂ. 6.50ಕ್ಕೆ ಸರಿಯಾಗಿ ಪೋತ ಮನೆಯ ವಠಾರದಲ್ಲಿ ತರಂಗಿಣಿ ಮಿತ್ರಮಂಡಳಿ ವತಿಯಿಂದ ಧ್ವಜಾರೋಹಣ ನಡೆಸಲಾಯಿತು. ನಂತರ ನಡೆದ ತಿರಂಗಾ ಯಾತ್ರೆಯಲ್ಲಿ ಸಂಘದ ಸದಸ್ಯರು, ದೇಶಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.    

ಉಡುಪಿ ಶ್ರೀಕೃಷ್ಣಾಪುರ ಮಠ ಪರ್ಯಾಯ ಮಹೋತ್ಸವ - 2022

ಉಡುಪಿ ಶ್ರೀಕೃಷ್ಣಾಪುರ ಮಠ ಪರ್ಯಾಯ ಮಹೋತ್ಸವ – 2022

Monday, September 26th, 2022

ಉಡುಪಿ ಶ್ರೀಕೃಷ್ಣಾಪುರ ಮಠ ಪರ್ಯಾಯ ಮಹೋತ್ಸವದ  ಪುರಪ್ರವೇಶ ಮೊದಲ್ಗೊಂಡು ಪರ್ಯಾಯದವರೆಗಿನ ಪುಷ್ಪಾಲಂಕಾರದ ನೇತೃತ್ವವಹಿಸಿದ ಬಾಲಪ್ಪ ರಾಮಚಂದ್ರ ರಾವ್ ಹಾಗೂ ಇವರೊಡನೆ ಸಹಕಾರ ನೀಡಿದ ಪಿ.ಕೆ. ಚಂದ್ರಶೇಖರ್ ರಾವ್, ಪಿ.ಕೆ ರಾಘವೇಂದ್ರ ರಾವ್ ಮತ್ತು ರಘುಪತಿ ರಾವ್,  ಪುಷ್ಪಾಲಂಕಾರ ಸೇವೆಯಲ್ಲಿ ಪಾಲ್ಗೊಂಡ ಸಂಘದ ಎಲ್ಲಾ ಸದಸ್ಯರಿಗೆ  ಸಂಘದ ಪರವಾಗಿ ತುಂಬು ಹೃದಯದ ಧನ್ಯವಾದಗಳು.

ವಿದ್ಯಾರ್ಥಿವೇತನ, ಆರೋಗ್ಯ ನಿಧಿ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ - 2021

ವಿದ್ಯಾರ್ಥಿವೇತನ, ಆರೋಗ್ಯ ನಿಧಿ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ – 2021

Monday, September 26th, 2022

ತರಂಗಿಣಿ ಮಿತ್ರಮಂಡಳಿ(ರಿ) ಮಧ್ವನಗರ ಪಡುಬಿದ್ರಿ, ಇದರ 2021ನೇ ಸಾಲಿನ ವಿದ್ಯಾರ್ಥಿವೇತನ, ಆರೋಗ್ಯ ನಿಧಿ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ದಿ.26-9-21ರಂದು ನೆರವೇರಿತು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಅನಂತ್ ರಾಜ್ ಪಡುಬಿದ್ರಿ (ಅಧ್ಯಕ್ಷರು ಶಿವಳ್ಳಿ ತುಳು ಅಂತರಾಷ್ಟ್ರೀಯ ವಿಪ್ರ ಪರಿವಾರ (ರಿ) ಬೆಂಗಳೂರು.) ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೋ. Dr. ರಾಘವೇಂದ್ರ ರಾವ್ (ಪ್ರಾಂಶುಪಾಲರು ಪಿ.ಪಿ.ಸಿ ಉಡುಪಿ), ಶ್ರೀ ವಿಷ್ಣು ಪಾಡಿಗಾರ್ (ಅಧ್ಯಕ್ಷರು ಯುವ ಬ್ರಾಹ್ಮಣ ಪರಿಷತ್, ಉಡುಪಿ), ಶ್ರೀ ಕುಮಾರ್ ಉಡುಪ (ಜಿ.ಎಮ್, ಉಡುಪಿ […]

ಭಾರತದ 75ನೆಯ ಸ್ವಾತಂತ್ರ್ಯೋತ್ಸವ

ಭಾರತದ 75ನೆಯ ಸ್ವಾತಂತ್ರ್ಯೋತ್ಸವ

Friday, August 20th, 2021

ಭಾರತದ 75ನೆಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ತರಂಗಿಣಿ ಮಿತ್ರ ಮಂಡಳಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಡುಬಿದ್ರಿ 9 ನೇ ವಾರ್ಡಿನ ಪಂಚಾಯತ್ ಸದಸ್ಯೆ ಶ್ರೀಮತಿ ಸುಜಾತಾ ಆಚಾರ್ ಅವರು ಧ್ವಜಾರೋಹಣ ನೆರವೇರಿಸಿದರು. ತರಂಗಿಣಿ ಮಿತ್ರ ಮಂಡಳಿಯ ಅಧ್ಯಕ್ಷ ಶ್ರೀ ರಮಾಕಾಂತ ರಾವ್, ಕಾರ್ಯದರ್ಶಿ ಶ್ರೀ ಹರಿಕೃಷ್ಣ ರಾವ್, ಇತರ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಧ್ವಜ ವಂದನೆಗೈದರು. ಕಾರ್ಯಕ್ರಮವನ್ನು ನಿರೂಪಿಸಿದ ಶ್ರೀಧರ ಆಚಾರ್ ಅವರು ಮಾತನಾಡುತ್ತಾ ಸ್ವತಂತ್ರ ಭಾರತಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಪೂರ್ವಕ […]

ಸಹಾಯ ಹಸ್ತ

ಸಹಾಯ ಹಸ್ತ

Friday, August 20th, 2021

ಗಣಪತಿ ಪ್ರೌಢ ಶಾಲಾ ಪ್ರಾಕ್ತನ ವಿದ್ಯಾರ್ಥಿ ಸಂಘ ಪಡುಬಿದ್ರಿ , ನವಶಕ್ತಿ ಮಹಿಳಾ ಭಜನಾ ಮಂಡಳಿ ಮತ್ತು ವಿಮೆನ್ಸ್ ವೆಲ್ಫೇರ್ ಸೊಸೈಟಿ ಹಾಗೂ ತರಂಗಿಣಿ ಮಿತ್ರಮಂಡಳಿ (ರಿ) ಪಡುಬಿದ್ರಿ ಇವರ ಸಂಯುಕ್ತ ಆಶ್ರಯದಲ್ಲಿ ಪಡುಬಿದ್ರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ತಾ | 17-07-2021 ನೇ ಶನಿವಾರದಂದು ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗಣಪತಿ ಪ್ರೌಢಶಾಲೆಗಳ ಆಯ್ದ 50 ವಿದ್ಯಾರ್ಥಿಗಳ ಪೋಷಕರಿಗೆ ಆಹಾರ ಧಾನ್ಯ ಮತ್ತು ಅಗತ್ಯ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು. ಪಡುಬಿದ್ರಿ ಪ್ರಾಥಮಿಕ […]

ವಾರ್ಷಿಕ ಮಹಾಸಭೆ ತಾ 4-7-2021 ಭಾನುವಾರ

Friday, August 20th, 2021

ತಾ 4-7-21 ರಂದು ನಡೆದ ತರಂಗಿಣಿ ಮಿತ್ರಮಂಡಳಿ(ರಿ) ಪಡುಬಿದ್ರಿ ಯ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು :- 1) ಗೌರವಾಧ್ಯಕ್ಷರು –  ರಾಮಚಂದ್ರ ರಾವ್ ಪಿ ಕೆ 2) ಅಧ್ಯಕ್ಷರು – ರಮಾಕಾಂತ ರಾವ್ 3) ಕಾರ್ಯದರ್ಶಿ – ಮುರುಡಿ ಹರಿಕೃಷ್ಣ ರಾವ್ 4) ಖಜಾಂಜಿ – ರಘುಪತಿ ರಾವ್ 5) ಉಪಾಧ್ಯಕ್ಷರು –  i) ರಾಜೇಶ್ ಉಪಾಧ್ಯಾಯ  ii) ಜನಾರ್ಧನ ರಾವ್ 6) ಉಪ ಕಾರ್ಯದರ್ಶಿ – ಅಭಿರಾಮ ಆಚಾರ್ಯ 7) ಸಂಘಟನಾ ಕಾರ್ಯದರ್ಶಿ–  i) ಸುದರ್ಶನ್ ರಾವ್ ii) […]

ಶ್ರೀ ರಂಜಿತ್ P J ಇವರಿಗೆ ಅಭಿನಂದನಾ ಪೂರ್ವಕ ಸನ್ಮಾನ

ಶ್ರೀ ರಂಜಿತ್ P J ಇವರಿಗೆ ಅಭಿನಂದನಾ ಪೂರ್ವಕ ಸನ್ಮಾನ

Friday, August 20th, 2021

ನಮ್ಮ ತರಂಗಿಣಿ ಮಿತ್ರಮಂಡಳಿಯ ಸದಸ್ಯ ಶ್ರೀ ಜಯಂತ್ P. H. ಹಾಗೂ ಶ್ರೀಮತಿ ಸ್ಮಿತಾ ಜಯಂತ್ ಇವರ ಸುಪುತ್ರ ಉಡುಪಿ ಪೂರ್ಣಪ್ರಜ್ಞ ಮಹಾವಿದ್ಯಾಲಯದ ವಿದ್ಯಾರ್ಥಿ ಹಾಗೂ ಪಡುಬಿದ್ರಿ ಮದ್ವನಗರದ ಹೆಮ್ಮೆಯ ಸುಪುತ್ರ ಶ್ರೀ ರಂಜಿತ್ P J ಇವರು ಭರತನಾಟ್ಯ, ಯಕ್ಷಗಾನ, NSS, ಹೀಗೆ ಹಲವು ರಂಗಗಳಲ್ಲಿ ಅಪ್ರತಿಮ ಸಾಧನೆ ಮಾಡಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಶೋಭಾಯಾತ್ರೆ ಹಾಗೂ ಪಥಸಂಚಲನದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದವರಲ್ಲಿ ಒಬ್ಬರಾಗಿ, ಅದರ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ […]

ಮಧ್ವನಗರ - ಕಲ್ಲಟ್ಟೆ - ಪಡುಬಿದ್ರಿ ಪೇಟೆ ನಡುವಿನ ರಸ್ತೆಯ ಮೊದಲ ಹಂತದ ಕಾಂಕ್ರೀಟೀಕರಣ ಕಾಮಗಾರಿಯ ಲೋಕಾರ್ಪಣೆ

ಮಧ್ವನಗರ – ಕಲ್ಲಟ್ಟೆ – ಪಡುಬಿದ್ರಿ ಪೇಟೆ ನಡುವಿನ ರಸ್ತೆಯ ಮೊದಲ ಹಂತದ ಕಾಂಕ್ರೀಟೀಕರಣ ಕಾಮಗಾರಿಯ ಲೋಕಾರ್ಪಣೆ

Monday, November 23rd, 2020

ತರಂಗಿಣಿ ಮಿತ್ರ ಮಂಡಳಿಯ ಸತತ ಪರಿಶ್ರಮದಿಂದ ಸಾಕಾರಗೊಂಡ ಮಧ್ವನಗರ – ಕಲ್ಲಟ್ಟೆ – ಪಡುಬಿದ್ರಿ ಪೇಟೆ ನಡುವಿನ ರಸ್ತೆಯ ಮೊದಲ ಹಂತದ ಕಾಂಕ್ರೀಟೀಕರಣ ಕಾಮಗಾರಿಯನ್ನು ಪಡುಬಿದ್ರಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ದಮಯಂತಿ ಅಮೀನ್ ಅವರು ಇಂದು ಲೋಕಾರ್ಪಣೆಗೈದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ ಪಡುಬಿದ್ರಿ, ತಾಲೂಕು ಪಂಚಾಯತ್ ಸದಸ್ಯರಾದ ನೀತಾ ಗುರುರಾಜ್, ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಸಾಲ್ಯಾನ್, ಹರೀಶ್ ಶೆಟ್ಟಿ, ತರಂಗಿಣಿ ಮಿತ್ರ ಮಂಡಳಿಯ ಅಧ್ಯಕ್ಷರಾದ ರಮಾಕಾಂತ ರಾವ್, ಮತ್ತು ಮಂಡಳಿಯ […]

ದೀಪಾವಳಿ - 2020

ದೀಪಾವಳಿ – 2020

Sunday, November 15th, 2020

ದೀಪಾವಳಿ ಹಬ್ಬದ ಪ್ರಯುಕ್ತ ಅಮರೇಂದ್ರ ಆಚಾರ್ಯ ಅವರ ನೇತೃತ್ವದಲ್ಲಿ ಅವರ ಸ್ವಗೃಹದಲ್ಲಿ ಸಾಮೂಹಿಕ ದೀಪಾವಳಿ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಅನುಸಾರವಾಗಿ ಗಡಿ ಕಾಯುವ ವೀರ ಯೋಧರ ಗೌರವಾರ್ಥ 1 ವಿಶೇಷ ದೀಪವನ್ನು ಹಚ್ಚಿ ಹೂಗುಚ್ಛ ಇಟ್ಟು ಅವರ ತ್ಯಾಗ ಬಲಿದಾನವನ್ನು ಸ್ಮರಿಸಲಾಯಿತು. ಆನಂತರ ವಿಶೇಷ ಸುಡುಮದ್ದು ಪ್ರದರ್ಶನ ನೆರವೇರಿತು. ಕಾರ್ಯಕ್ರಮದಲ್ಲಿ  ಸುಧಾಕರ ರಾವ್, ಜಯಂತ್ ಪಿ ಎಚ್, ಅಭಿರಾಮ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಆಗಮಿಸಿದ್ದ ಎಲ್ಲರಿಗೂ ಅಮರೇಂದ್ರ ಆಚಾರ್ಯ […]

ತುಳಸಿ ಸಂಕಿರ್ತನೆ

ತುಳಸಿ ಸಂಕಿರ್ತನೆ

Sunday, November 15th, 2020

ಕಾರ್ತಿಕ ಶುದ್ದ ಪಾಡ್ಯದಿಂದ ದ್ವಾದಶಿ ಪರ್ಯಂತ ಕಾರ್ತೀಕ ದಾಮೋದರನ ಪ್ರೀತ್ಯರ್ತವಾಗಿ ತುಳಸಿ ಸಂಕಿರ್ತನೆಯು ತರಂಗಿಣಿ ಮಿತ್ರ ಮಂಡಳಿ ವತಿಯಿಂದ ನಡೆಯಲಿದೆ. http://epaper.udayavani.com/ArticlePage/APpage.php?edn=Manipal&articleid=UVANI_SUDP_20201115_4_1&artwidth=583px