ಶ್ರೀ ಮಹಾವಿಷ್ಣು ಸಹಸ್ರನಾಮಾಧ್ವರ ಮತ್ತು ಶ್ರೀ ವಿಷ್ಣುಸಹಸ್ರನಾಮ ಪಠಣ – ಸೆಪ್ಟೆಂಬರ್ 17, 2017

ತರಂಗಿಣಿ ಮಿತ್ರ ಮಂಡಳಿ (ರಿ) ಪಡುಬಿದ್ರಿ ಹಾಗೂ ಶಿವಳ್ಳಿ ತುಳು ಅಂತರಾಷ್ಟ್ರೀಯ ವಿಪ್ರಪರಿವಾರ (ರಿ), ಬೆಂಗಳೂರು., ಇವುಗಳ ಸಹಯೋಗದಲ್ಲಿ ಸೆಪ್ಟೆಂಬರ್ 17, ರವಿವಾರದಂದು ಪಡುಬಿದ್ರಿ  ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಮತ್ತು ದೇಶದ ಯೋಧರ ಶ್ರೇಯಸ್ಸಿಗಾಗಿ, ಶ್ರೀ ಮಹಾವಿಷ್ಣು ಸಹಸ್ರನಾಮಾಧ್ವರ ಮತ್ತು ಶ್ರೀ ವಿಷ್ಣುಸಹಸ್ರನಾಮ ಪಠಣಗಳು ಭಕ್ತಿ ಭಾವಗಳೊಂದಿಗೆ ನೆರವೇರಿತು.

ಈ ಸಂಬಂಧವಾಗಿ ನಡೆದ ವಿಶೇಷ ಸಭಾಕಾರ್ಯಕ್ರಮದಲ್ಲಿ ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನವಿತ್ತರು. ಸಭಾಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಮಂಜುನಾಥ ಉಪಾಧ್ಯಾಯರು ವಹಿಸಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕರಾದ ವೇ।। ಮೂ।। ಶ್ರೀ ವಾಸುದೇವ ಅಸ್ರಣ್ಣ, ದ.ಕ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಗಣ್ಯರಾದ ಶ್ರೀ ಹರಿಕೃಷ್ಣ ಪುನರೂರು., ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ವಿಪ್ರಪರಿವಾರದ ಅಧ್ಯಕ್ಷ ಅನಂತರಾಜ್ ಪಡುಬಿದ್ರಿ ಇವರು ಸ್ವಾಗತಿಸಿದರು. ಕಾರ್ಯದರ್ಶಿ ಪ್ರತೀಕ್ ಭಟ್ ವರದಿ ವಾಚನಗೈದರು. ತರಂಗಿಣಿ ಮಿತ್ರ ಮಂಡಳಿಯ ಮುರುಡಿ ಹರಿಕೃಷ್ಣ ರಾವ್ ಧನ್ಯವಾದ ಸಮರ್ಪಿಸಿದರು. ತರಂಗಿಣಿಯ ನಿಕಟಪೂರ್ವ ಅಧ್ಯಕ್ಷ ಪಿ. ಶ್ರೀಧರ ಆಚಾರ್ ಇವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಹಾಯ ಧನವನ್ನು ವಿತರಿಸಲಾಯಿತು.20170917_112832 IMG-20170918-WA0006 IMG-20170917-WA0008

Leave a Reply